
ನಾಯಿ ಮರಿ ಅಂದ್ರೆ ಕೆಲವರಿಗೆ ಭಯ ಮತ್ತೆ ಕೆಲವರಿಗೆ ಪ್ರೀತಿ. ನಾಯಿಯನ್ನು ನೋಡಿ ಓಡಿ ಹೋಗುವವರು ಇದ್ದಾರೆ ಅದನ್ನು ಹತ್ತಿರ ಕರೆದು ಮುದ್ದು ಮಾಡುವವರು ಸಹ ಇದ್ದಾರೆ.
ನಾಯಿ ಬಹಳ ಬುದ್ಧಿವಂತ ಹಾಗು ಸೂಕ್ಷ್ಮ ಪ್ರಾಣಿ. ನಾಯಿಗಳು ನಮ್ಮಂತೆ ಮಾತನಾಡದಿದ್ದರೂ ಪ್ರತಿ ಮಾತನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ, ಮಾತುಬರದ ಸಣ್ಣ ಮಗುವಿನಂತೆ.
ನಾಯಿಯ ಸ್ವಾಮಿ ನಿಷ್ಠೆ ಪ್ರೀತಿ ವಿಶ್ವಾಸ ಮನುಷ್ಯ ನೋಡಿ ಕಲಿಯಬೇಕು. ಯಜಮಾನ ಎಂತಹ ಮನುಷ್ಯನೇ ಆಗಿರಲಿ, ನಾಯಿ ನಿಯತ್ತಿಂದ ಇರುತ್ತದೆ. ಮಕ್ಕಳ ಮನಸ್ಸಿನಂತೆ ನಿಷ್ಕಲ್ಮಶವಾದದ್ದು ಅವುಗಳ ಮನಸ್ಸು. ಹುಟ್ಟಿನಿಂದ ಕೊನೆಯವರೆಗೂ ಹಾಗೆ ಇರುತ್ತವೆ ಅವು. ಆದರೆ ಮನುಷ್ಯರು ಬದಲಾಗುತ್ತಾನೆ ಹೋಗುತ್ತಾರೆ ಪ್ರತಿ ದಿನ ಪ್ರತಿ ನಿಮಿಷ ಪ್ರತಿ ಘಳಿಗೆ. ಮನಸ್ಸಿನಲ್ಲಿ ಒಂದು ಹೊರಗೆ ಇನ್ನೊಂದು. ಮೋಸ ವಂಚನೆ ಎಲ್ಲ ಸೇರಿರುತ್ತೆ. ಪ್ರಾಣಿಗಳಿಂದ ಕಲಿಯಬೇಕಾದದ್ದು ತುಂಬ ಇದೆ ಅದ್ರೆ ಕಲಿಯೋ ಮನಸ್ಸು ಹೃದಯ ಇದೆಯೇ?

2 comments:
NICE Blog :)
Take a peek into the future of High Definition Technology at
http://hdtv2008.blogspot.com
Registration- Seminar on the occasion of kannadasaahithya.com 8th year Celebration
ಪ್ರೀತಿಯ ಅಂತರ್ಜಾಲ ಸ್ನೇಹಿತರೆ,
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
Post a Comment