Sunday, November 22, 2009

ಪುಸ್ತಕ ಮೇಳ



ನಮ್ಮ ಮನೆಯಲ್ಲಿ ದೊಡ್ಡ ಪುಸ್ತಕ ಭಂಡಾರೆವೆ ಇದೆ. ನಮ್ಮ ತಂದೆ ಹಾಗು ತಾತ ಸಂಗ್ರಹಿಸಿರುವ ಪುಸ್ತಕಗಳು. ಎಲ್ಲ ರೀತಿಯ ಕನ್ನಡ ಪುಸ್ತಕಗಳು ಇವೆ. ರಾಮಾಯಣ, ಮಹಾಭಾರತ, ಭಾಗವತ, ಕಥೆ, ಕಾದಂಬರಿಗಳು, ಐತಿಹಾಸಿಕ ಪುಸ್ತಕಗಳು, ಸ್ವತಂತ್ರ ಹೋರಾಟದ ಪುಸ್ತಕಗಳು, ಮಕ್ಕಳ ಅಮರ ಚಿತ್ರ ಕಥಾ, ಬಾಲಮಂಗಳ, ಬಾಲಮಿತ್ರ, ಚಂದಮಾಮ, ದಿನಕೊಂದು ಕಥೆ, ಹೇಗೆ ಹಲವರು ಬಗೆಯ ಪುಸ್ತಕಗಳು ಇವೆ. ನನಗೂ ಸಹ ಪುಸ್ತಕಗಳೆಂದರೆ ತುಂಬಾ ಇಷ್ಟ. ಎಂತಹ ಪುಸ್ತಕವನ್ನಾದರೂ ಓದುತ್ತೇನೆ. ಆದ್ರೆ ನನ್ನ ತಮ್ಮ ಸಣ್ಣ ಕಥೆ, ಕಾಮಿಕ್ಸ್ ಅಥವಾ ಜೋಕ್ಸ್ ಓದುತ್ತಾನೆ ಜೊತೆಗೆ ದಿನಪತ್ರಿಕೆಯನ್ನು ತಪ್ಪದೆ ಓದುತ್ತಾನೆ.

ನಾನು ಮೊನ್ನೆ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ Auto Expo ಮತ್ತು ಪುಸ್ತಕ ಮೇಳಕ್ಕೆ ನನ್ನ ತಮ್ಮ ನ ಜೊತೆ ಹೋಗಿದ್ದೆ. ನನ್ನ ತಮ್ಮಗೆ ಇಷ್ಟವಿದ್ದಿದ್ದು ಬರಿ ಆಟೋ expo ಆದ್ರೆ ನನಗೆ ಬೇಕಿದ್ದಿದ್ದು ಪುಸ್ತಕ ಮೇಳ.

ಮೊದಲು Auto Expo ಗೆ ಹೋದೆವು. Entrance fee Rs.50, ಆದ್ರೆ ಟಿಕೆಟ್ ಸುಲಭವಾಗಿ ಸಿಕ್ಕಿತು. ಅಲ್ಲಿ ತರಾವರಿ ಕಾರುಗಳು ಹಾಗು ಮೋಟಾರ್ ಬೈಕ್ ಗಳು. ಎಲ್ಲ ಕಂಪೆನಿಗಳ ಕಾರ್ ಗಳು ಇದ್ದವು. Tata, Hundai, Maruti, Skoda, Mahindra, BMW, ಮತ್ತಿತರ ಕಾರ್ ಗಳು ಇದ್ದವು. ಕ್ಯಾಮೆರಾ ತೆಗೆದುಕೊಂಡು ಹೋಗಿದ್ದೇವೆ, ಎಲ್ಲ ಕಾರು ಗಳ ಜೊತೆ ನನ್ನ ತಮ್ಮನ ವಿವಿಧ ಭಂಗಿಗಳು ಫೋಟೋ ತೆಗೆದೆನು. ತುಂಬಾ ಜನ ಬಂದಿದ್ದರು. ಎಲ್ಲರು ಸಹ ಕ್ಯಾಮೆರಾ ತಂದು ಫೋಟೋಗಳನ್ನು ತೆಗೆದುಕೊಳ್ಳುತಿದ್ದರೆ ಹೊರತು ಯಾರು ಸಹ ಕಾರ್ ಕೊಂಡುಕೊಳ್ಳುವ ಬಗ್ಗೆ ವಿಚಾರಿಸುತ್ತಿರಲಿಲ್ಲ .ನಾವು ಹೋಗಿ ಅರ್ಧ ಘಂಟೆಗೆಲ್ಲ ಪೂರ್ತಿ ನೋಡಿದ್ದು ಮುಗಿಯಿತು.

ಅಲ್ಲಿಂದ ಮುಂದೆ ನಾವು ಪುಸ್ತಕ ಮೇಳಕ್ಕೆ ಬಂದೆವು. ಇಲ್ಲಿ Entrance fee Rs.20. ಉದ್ದನೆಯ ಕ್ಯೂ ಇತ್ತು. ಕ್ಯೂ ನಲ್ಲಿ ನಿಂತು ಸುತ್ತ ಮುತ್ತ ಜನರನ್ನು ನೋಡುತ್ತಿದ್ದೆ. ನಾನು ಸುಮಾರು ವರ್ಷಗಳು ಹಿಂದೆ ಪುಸ್ತಕ ಮೇಳಕ್ಕೆ ಹೋಗಿದ್ದ ನೆನಪು. ಆಗೆಲ್ಲ ಕಡೆಮೆ ಜನ ಬರುತ್ತಿದ್ದರು. ಆದರೆ ಇಲ್ಲಿ ನೆರೆದಿದ್ದ ಜನರನ್ನು ನೋಡಿ ಆಶ್ಚರ್ಯವಾಯಿತು ನನಗೆ. ಸಿಕ್ಕಾಪಟ್ಟೆ ಜನ, ಕಡಲೆಕಾಯಿ ಪರುಷೆಯಲ್ಲಿ ಇದ್ದಂತೆ ಇದ್ದರು. ಒಂದು ಗಮನಿಸಬೇಕಾದಂತಹ ವಿಷಯವೆಂದರೆ ಹೊರಗೆ ಬರುತ್ತಿದ್ದ ಪ್ರತಿಯೊಬ್ಬರ ಕೈಯಲ್ಲೂ ಪುಸ್ತಕಗಳು ಇದ್ದವು. ನನ್ನ ತಮ್ಮನಿಗೆ ಇಲ್ಲಿ ಬರಲು ಸ್ವಲ್ಪವು ಮನಸ್ಸಿರಲಿಲ್ಲ. ಎಳೆದುಕೊಂಡು ಒಳಗೆ ಹೋದೆ ನಾನು. ಅಲ್ಲಿ ಸುಮಾರು ೩೦೦ ಪುಸ್ತಕದ ಅಂಗಡಿಗಳು ಇದ್ದವು. ನಾನು ಕಂಡಂತೆ ಪ್ರತಿಯೊಂದು ಮಳಿಗೆಯಲ್ಲಿ ತುಂಬಾ ಜನ ತುಂಬಿದ್ದರು. ಪುಸ್ತಕ ನೋಡಲು ಸಹ ನೂಕುನುಗ್ಗಲು. ಎಲ್ಲ ರೀತಿಯ ಪುಸ್ತಕಗಳು ನೋಡ ಸಿಕ್ಕಿತು - ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಉರ್ದು. ಹೋಗುವುದೇ ಬೇಡವೆನ್ನುತಿದ್ದ ನನ್ನ ತಮ್ಮನೇ, ಪುಸ್ತಕಗಳನ್ನು ಹುಡುಕಿ ಹುಡುಕಿ ತೆಗೆದುಕೊಂಡ. ಅಂದರೆ ಅಲ್ಲಿ ಹತ್ತು ಹಲವು ರೀತಿಯ ಪುಸ್ತಕಗಳು ಸಿಕ್ಕವು, ಬರೀ ಕಥೆ ಕಾದಂಬರಿಗಳಲ್ಲ. ಎಂಥವರು ಸಹ ಒಂದಲ್ಲ ಒಂದು ಪುಸ್ತಕವನ್ನು ಕೊಂಡುಕೊಳ್ಳಲೆ ಬೇಕು, ಹಾಗಿತ್ತು ಅಲ್ಲಿನ ಪರಿಸರ.

ಪುಸ್ತಕ ಮೇಳ ವನ್ನು ನೋಡಿ ಬಹಳ ಸಂತೋಷವಾಯಿತು. ಎಲ್ಲಿ ನೋಡಿದರೂ ಪುಸ್ತಕ!! ಎಲ್ಲರು ಕೈಯಲ್ಲೂ ಪುಸ್ತಕ!! ಕೆಲವು ವರ್ಷಗಳ ಹಿಂದೆ, ಕನ್ನಡ ಪುಸ್ತಕ ಪ್ರಕಾಶಕರು ನಮ್ಮಲ್ಲಿ ಪುಸ್ತಕ ಓದುವವರು ಕಡಿಮೆಯಾಗಿ, ಕೊಂಡುಕೊಳ್ಳುವವರು ಯಾರು ಇಲ್ಲ ಎಂದು ಪೇಚಾಡುತಿದ್ದರು. ಆದರೆ ಇಲ್ಲಿ ಹೋಗಿಬಂದ ಮೇಲೆ ಅನಿಸುತ್ತಿದೆ ಜನ ಬದಲಾಗಿದ್ದಾರೆ ಎಂದು, ಜನ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುತ್ತಾರೆ.

Tuesday, September 1, 2009

IT ಜೀವನ



ನಮ್ಮ ತಂದೆ ಅಥವಾ ತಾತನ ಕಾಲದಲ್ಲಿ ಕೆಲಸ ಅಂದ್ರೆ ಸ್ಕೂಲ್ ಮೇಷ್ಟ್ರು, govt ಆಫೀಸು ಪೋಸ್ಟ್ ಆಫೀಸು, KEB, Water supply, ಹೀಗೆ ಕೇಳಿಬರುತ್ತಿತ್ತು. ಕಳೆದ ಎರಡು ದಶಕಗಳಿಂದ ಎಲ್ಲಿ ನೋಡಿದ್ರು ಬರಿ IT/BT ಕಂಪೆನಿಗಳ ಹೆಸರೇ ಕೇಳಿಬರುತ್ತೆ.

ಎಲ್ಲ ಕಡೆ ಇಂಜಿನಿಯರಿಂಗ್ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿವೆ ಜೊತೆಗೆ ನಾನಾ ರೀತಿಯ ಸಾಫ್ಟವೇರ್ ಟ್ರೈನಿಂಗ್ ಸೆಂಟರ್ ಗಳು. ಕೋರ್ಸ್ ಮುಗಿದ ನಂತರ ಕೆಲಸ ಕೊಡಿಸುವ ಆಶ್ವಾಸನೆ. ಇದಕ್ಕಾಗಿ ಜನರು ಕೇಳಿದಷ್ಟು ದುಡ್ಡು ಸುರಿದು ಮುಗಿಬಿದ್ದು ಸೇರುತ್ತಿದ್ದಾರೆ. ಒಂದು ಒಳ್ಳೆ
ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಸಿಕ್ಕಿಬಿಟ್ಟರಂತೂ, ಜೀವನದ ಬಹುದೊಡ್ಡ ಸಾಧನೆ.

ಕೆಲಸ ಸಿಕ್ಕಿ ಸೇರೋತನಕ ಎಲ್ಲ ಚೆನ್ನಾಗೇ ಇರುತ್ತೆ. ಸೇರಿದ ಮೇಲೆ ಈ IT ಲೋಕದ ನಿಜ ಪರಿಚಯವಾಗುತ್ತದೆ. ಸಂಪಾದನೆಯ ವಿಷಯ ಬಿಟ್ಟರೆ,
ಇನ್ನೇನು ಸುಖ ಇರೋಲ್ಲ. ಸಂಪದಿಸಿದ್ದನ್ನು ಖರ್ಚುಮಾಡುವುದಕ್ಕೂ ಸಹ ಪುರೋಸೋತ್ತು ಇರುವುದಿಲ್ಲ. ನಮ್ಮ ಮನೆ ಒಂದು ದಿಕ್ಕಾದರೆ, ಆಫೀಸು
ಮತ್ತೊಂದು ದಿಕ್ಕು ಇರುತ್ತೆ. ಆಫೀಸಿನಲ್ಲಿ ದಿನ ಮೀಟಿಂಗ್ಸ್, ಕ್ಲೈಂಟ್ ಕಾಲ್ಸ್ ಮತ್ತು ಸಿಕ್ಕಾಪಟ್ಟೆ ಕೆಲಸ. ಹೆಸರಿಗೆ ೯ - ೬ ಕೆಲಸ. ಆದರೆ ಮುಂಜಾನೆ ಮನೆಯಿಂದ ಹೊರಟರೆ, ಹೊತ್ತು ಮುಳುಗಿದ ಮೇಲೋ ಇಲ್ಲಾ ರಾತ್ರಿಗೆ ಮನೆ ಸೇರೋದು. ಒಮ್ಮೊಮ್ಮೆ ಅಂತು ಮಧ್ಯ ರಾತ್ರಿ.

ಅಷ್ಟೇ ಅಲ್ಲ, ಈಗಂತೂ ಎಲ್ಲಾ ಕಡೆಗಳಿಂದ ಜನ ವಲಸೆ ಬರುತ್ತಾ ಇದ್ದಾರೆ, competition ಜಾಸ್ತಿ. ಎಷ್ಟು ಓದಿದರು ಸಾಲದು. ನಮ್ಮ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಿಕೊಳ್ಳಲು ಯಾವಾಗಲು ಏನರ ಒಂದು ಓದುತ್ತಾನೆ ಇರಬೇಕು. ಸಾಲದಕ್ಕೆ ಎಲ್ಲಾ ಕಡೆ ಬೇರೆ ಕಡೆಯಿಂದ ಬಂದ ಜನರ ಸಿಕ್ಕಾಪಟ್ಟೆ ರಾಜಕೀಯ, ಗುಂಪುಗಾರಿಕೆ. ಇವರುಗಳ ಮಧ್ಯೆ ನಾವು ಬದುಕಬೇಕು. ನಾವು ಎಷ್ಟೇ ನೀತಿ ನಿಜಾಯಿತಿಯಿಂದ ಕೆಲಸ ಮಾಡಿದರೂ ಸಹ, ಪ್ರಮೋಷನ್ ಸಿಗೋದು ತುಂಬಾ ಕಷ್ಟ. ದಿನ ನಮ್ಮ ಜೀವನ ಒಂದು ರೀತಿಯ ಹೋರಾಟ.

ಏನಪ್ಪಾ ಇದು ಬರೀ -ve ವಿಷಯಗಳನ್ನೇ ಪಟ್ಟಿ ಮಾಡ್ತಾ ಇದ್ದೀನಿ ಅಂತ ಅನ್ನಿಸ್ತ ಇದೆ. ಎಲ್ಲರು +ve ಹೇಳಿ -ve ಗೆ ಬರುತ್ತಾರೆ. ನಾನು ಉಲ್ಟಾ ಬರ್ತಾ ಇದ್ದೀನಿ.

ಸಾಫ್ಟವೇರ್ ಕಂಪನಿ ಸೇರೋದರಿಂದ ಆಗೋ ಲಾಭಗಳು ಏನು ಕಡಿಮೆ ಇಲ್ಲಾ. ಸಂಪಾದನೆ ತುಂಬಾ ಚೆನ್ನಾಗಿರುತ್ತೆ, ದೇಶಗಳನ್ನು ಸುತ್ತಬಹುದು,ಮನೆ ಮತ್ತು ಕಾರ್ ತೊಗೊಬಹುದು. ಕಂಡಿದ್ದೆಲ್ಲ ತೊಗೊಬಹುದು. ಅನೇಕ ರೀತಿಯ ಜನಗಳ ಪರಿಚಯವಾಗುತ್ತದೆ. ಒಂದು ರೀತಿಯ Hi-Fi ಜೀವನ.

ನಿಧಾನವಾಗಿ ಕೂತು ಯೋಚಿಸಿದರೆ, ನಮ್ಮ ಜೀವನ ಎತ್ತ ಸಾಗುತ್ತಿದೆ ಅಂತಾನೆ ಗೊತ್ತಾಗ್ತಾ ಇಲ್ಲ. ಮೊದಲಾದರೆ ಯಾವುದೇ ಕೆಲಸದಲ್ಲಿ ಇದ್ದರು ಸಹ
೯ - ೫ ಕೆಲಸ ಮಾಡಿ ಮನೆಗೆ ಹಿಂತಿರುಗುತ್ತಿದ್ದರು. ಮನೆ ಮಕ್ಕಳು ಸಂಸಾರ ಅಂತ ಸಂತೋಷವಾಗಿ ಇರುತ್ತಾ ಇದ್ದರು. ಸಂಪಾದನೆ ಹೆಚ್ಚಿಲ್ಲದಿದ್ದರೂ
ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಸಣ್ಣ ಪುಟ್ಟ ಉಳಿತಾಯ ಸಹ ಮಾಡುತ್ತಿದ್ದರು. ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳುತಿದ್ದರು. ಚೆನ್ನಾಗಿತ್ತು ಆ ದಿನಗಳು. ಸಂಬಳ ಬಂದ ದಿನ ಸಾಮನ್ಯವಾಗಿ ಮನೆಯವರನ್ನೆಲ್ಲ ಹೋಟೆಲ್ ಗೆ ಕರೆದುಕೊಂಡು ಹೋಗಿ ತಿಂಡಿ ಕೊಡಿಸುತ್ತಿದ್ದರು.
ಆದರೆ ಈಗ, ಯಾವುದಕ್ಕೂ ಪುರುಸೊತ್ತಿಲ್ಲ, ಸಮಯವಿಲ್ಲ. ಬರಿ ಸಂಪಾದನೆಯೇ ಗುರಿಯಾಗಿ ಹೋಗಿದೆ.

ಬೇಕಾ ಈ ಜೀವನ? ಏನು ಸಾಧಿಸ್ತೀವಿ ಹೀಗೆ ?
ದ್ವಂದ್ವದ ಪ್ರಶ್ನೆ ಇದು. ಒಂದು ರೀತಿ ನೋಡಿದ್ರೆ, ಈಗಿನ ಕಾಲದಲ್ಲಿ ಎಲ್ಲರಂತೆ ನಾವು ಇರಕ್ಕೆ ಈ ಕೆಲಸ ಬೇಕು, ಆದ್ರೆ ಎಲ್ಲೋ ಒಂದು ಕಡೆ ಅನ್ನಿಸುತ್ತೆ, ನಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾ ಇದ್ದಿವೇನೋ ಅಂತ.

"ಹಿಂದುರುಗಿ ಹೋಗಲಾರೆನು, ಮುಂದಡಿ ಇಡಲಾರೆನು". ಇದು ನಮ್ಮ ಮನಸ್ಥಿತಿ.

Friday, August 21, 2009

An old memory


An old one from 2007 January.
Won 3rd Prize in a Rangoli competition conducted by Radio Mirchi :)

ಚುಟುಕ

ಆಸೆಗಳ ಸಾಗರದ ಒಳಹೊಕ್ಕು
ನೂರಾರು ಕನಸುಗಳ ಕಂಡೆ|
ಉಕ್ಕೇರುವ ಅಲೆಗಳ ನಡುವೆ
ಕಳೆದುಹೋಯಿತು ಕಂಡ ಕನಸುಗಳು||

Saturday, August 15, 2009

ವಿದೇಶ



ವಿದೇಶ= Foreign = ಪರದೇಶ
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅನ್ನೋ ಒಂದು ಗಾದೆ ಮಾತು ಇದೆ. ಅಂದ್ರೆ ಪ್ರಪಂಚ ಸುತ್ತಿ ನೋಡಿ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಇವೆ ಎಂದು ಕೇಳಿರುತ್ತೇವೆ. ಅಷ್ಟಲ್ಲದೆ, ಎಲ್ಲೂ ಹೋಗದೆ ಇರುವವರಿಗೆ ಬಾವಿಯಲ್ಲಿರುವ ಕಪ್ಪೆ ಅನ್ನೋ ಮಾತು ಸಹ ಕೇಳಿರುತ್ತೀವಿ.
ಪೀಠಿಕೆ ಜಾಸ್ತಿ ಆಯಿತು ಅಲ್ವಾ? ವಿಷಯಕ್ಕೆ ಬರ್ತೀನಿ.

ಈ ಕಾಲದಲ್ಲಿ, ಅದೂ ಈ IT/BT ಯುಗದಲ್ಲಿ ಹೆಚ್ಚು ಕಡಿಮೆ ಎಲ್ಲರ ಮನೇಲೂ ಯಾರೋ ಒಬ್ರು ವಿದೇಶದಲ್ಲಿ ಇರ್ತಾರೆ ಇಲ್ಲ ಹೋಗಿ ಬಂದಿರ್ತಾರೆ.
ಇವರಲ್ಲಿ ನಾವು ಸುಮಾರು ರೀತಿಯ ಜನರನ್ನು ನೋಡಬಹುದು ( keeping in mind the middle class people)

೧. ಓದಿಗಾಗಿ ವಿದೇಶಕ್ಕೆ ಹೋಗುವವರು:-
ಡಿಗ್ರಿ ಓದುವಾಗಲೇ, TOFEL, GRE ಮುಂತಾದ ಪರೀಕ್ಷೆಗಳಿಗೆ ತಯಾರಾಗಿ ಅಮೇರಿಕಾದ ಯಾವುದಾದರು ಒಂದು ವಿಶ್ವವಿಧ್ಯಾನಿಲಯದಲ್ಲಿ ಸ್ಕಾಲರ್ಶಿಪ್ ಸೀಟ್ ಸಿಕ್ಕಿದರೆ ಆಯಿತು. ಜನ್ಮ ಸಾರ್ಥಕ. ಸಾಲಸೋಲ ಮಾಡಿ ಹೇಗೋ ಅಲ್ಲಿ ಹೋಗಿ ಸೇರುವುದು. ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ಹೇಗೋ ಓದು ಮುಗಿಸುತ್ತಾರೆ. ಇನ್ನು ಓದಿದ ಮೇಲೆ, ಕೆಲಸದ ಅನುಭವ ಸಹ ಅಲ್ಲೇ ಆಗಬೇಕು. ಏನಿಲ್ಲದಿದ್ದರೂ, ಓದಿಗಾಗಿ ಮಾಡಿದ ಸಾಲವನ್ನಾದರೂ ತೀರಿಸಲು, ಅಲ್ಲಿ ಕೆಲಸ ಮಾಡಲೇ ಬೇಕು.
ಹೀಗೆ ಅದು ಮುಂದ್ವರಿತಾ ಹೋಗುತ್ತೆ. ಮೊದಲು ೧ -೨ ವರ್ಷಕ್ಕೆ ಹೋದವರು, ಎರಡು ನಾಲ್ಕಾಗುತ್ತೆ, ನಾಲ್ಕು ಎಂಟು ಆಗುತ್ತೆ. ಮತ್ತೆ ಮದುವೆ, ಹೆಂಡತಿ, ಮಗು, ಹೀಗೆ ಬೆಳಿತಾ ಹೋಗುತ್ತೆ. ಆದ್ರೆ ವಾಪಾಸ್ ಮಾತ್ರ ಬರಲ್ಲ.

೨. ಕೆಲಸ ಮೇಲೆ ವಿದೇಶಕ್ಕೆ ಹೋಗುವವರು:-
long term or short term assignments ಅಂತ ಹೋಗ್ತಾರೆ. ಇಲ್ಲಿಂದ ಒಂದು ಕಂಪನಿ ಮುಖಾಂತರ ಹೋಗಿ ಎಷ್ತಗುತ್ತೋ ಅದ್ದು ದುಡ್ಡು ಉಳಿಸಿ ಮತ್ತೆ ವಾಪಾಸ್ ಬರಬೇಕು ಅಂತಾನೋ ಇಲ್ಲ ಅಲ್ಲಿ ಬೇರೆ ಕೆಲಸ ಹುಡುಕಿ ಗ್ರೀನ್ಕಾರ್ಡ್ ಸಿಕ್ಕಿ ಅಲ್ಲೇ ಇರೋ ಯೋಚನೆ ಮಾಡೋರೆ ಜಾಸ್ತಿ. ಇಂತಹವರು, ಬರೋ dollars/pounds ಹೇಗೆ ಉಳಿಸಬೇಕು ಅಂತ ಯೋಚನೆ ಮಾಡಿ ಮಾಡಿ, ಊಟ ತಿಂಡಿ ಎಲ್ಲ ಕಡಿಮೆ ಮಾಡ್ತಾರೆ. ಪೈಸ ಪೈಸ ಲೆಕ್ಕ ಹಾಕಿ ಉಳಿಸುತ್ತಾರೆ. ಎಷ್ಟು ವರ್ಷಗಳು ಇದ್ರೂ ಸಹ, ಇದೆ ಜೀವನ, ಮಕ್ಕಳು ಮರಿ ಎಲ್ಲ ಅದರೂ ಸಹ ಉಳಿತಾಯ ಮುಖ್ಯ. ಉದ್ದೇಶ ಏನು ಅಂದ್ರೆ, ಮತ್ತೆ ಕೆಲವು ವರ್ಷಗಳ ನಂತರ ಭಾರತಕ್ಕೆ ಬಂದು ಇರೋದು. ಆದ್ರೆ ಅಷ್ಟರಲ್ಲಿ ಎಷ್ಟು ಆಗುತ್ತೋ ಅಷ್ಟು ದುಡ್ಡು ಉಳಿಸಿ ಇಲ್ಲಿ ಬಂದು ದಿಲ್ದಾರ ಆಗಿ ಬದುಕೋ ಅಸೆ. ಇವರುಗಳು, ವಿದೇಶಿಗಳು ಅಲ್ಲದೆ, ಸ್ವದೆಷಿಗಳು ಅಲ್ಲದೆ ತ್ರಿಶಂಕುವಿನಂತಹವರು.

೩. ಪ್ರಪಂಚ ಸುತ್ತಿ ಸಂತೋಷ ಪಡೋರು: -
ಇವರು ಕೆಲಸದ ಮೇಲೆ ಅಥವಾ ಓದಕ್ಕೆ ಹೋದರು ಸಹ, ಸಂತೋಷವಾಗಿ ಎಲ್ಲಿ ಹೇಗೆ ಇರಬೇಕು ಹಾಗೆ ಇದ್ದು ಸಂತೋಷವಾಗಿ ಇರ್ತಾರೆ. ಸಂತೋಷವಾಗಿ ನಮ್ಮ ದೇಶಕ್ಕೆ ವಾಪಸ್ಸು ಸಹ ಬರ್ತಾರೆ.

ಇನ್ನು ಹಲವು ಬಗೆಯ ಜನರಿರಬಹುದು. ಆದ್ರೆ ಜನ ಒಂದು ವಿಷಯ ಮರಿತಾರೆ. ನಮ್ಮ ಬೇರು ಇರೋದು ಈ ದೇಶದಲ್ಲೇ. ವಿದೇಶಕ್ಕೆ ಹೋದ ಹೊಸತರಲ್ಲಿ ಎಲ್ಲ ಚೆನ್ನಾಗಿರುತ್ತೆ. ಹೊಸ ಜಾಗ, ಹೊಸ ಸಂಸ್ಕೃತಿ, ಹೊಸ ವಿಷಯಗಳು. ಕೆಲವು ದಿನಗಳು ಕಳೆದಂತೆ ಬೇಸರ ಬರುತ್ತೆ. ಗೊತ್ತಿಲ್ಲದ ಜನ, ನಮ್ಮ ಭಾಷೆ ಎಲ್ಲೂ ಸಹ ಕೇಳಸಿಗುವುದಿಲ್ಲ.ನಾವು ಅವರ ಸಂಸ್ಕೃತಿಗೆ ವಗ್ಗಿಹೊಗುತ್ತೀವಿ. ಅಲ್ಲಿ ಬರೀ ನಾವು ಇರುತ್ತೀವಿ. ಅಮ್ಮ, ಅಪ್ಪ, ನೆಂಟರು ಇಷ್ಟರು, ಗೆಳೆಯರು ಎಲ್ಲರು ಇರೋದು ಎಲ್ಲರು ಭಾರತದಲ್ಲಿ. ಹಬ್ಬ ಹರಿದಿನ ಯಾವುದಕ್ಕೂ ಯಾರು ಜೊತೆಗೆ ಇರೋದಿಲ್ಲ.

ಅಮ್ಮ ಅಪ್ಪ ನಮ್ಮ ದಾರಿ ಕಾಯ್ಕೊಂಡು ಇರ್ತಾರೆ. ಏನರ ಹೆಚ್ಚು ಕಡಿಮೆ ಅದ್ರು ನಾವು ಮಕ್ಕಳು ಜೊತೆಗೆ ಇರೋದಿಲ್ಲ.
ಯಾವುದು ಸರಿ ಯಾವುದು ತಪ್ಪು ಅಂತ ಹೇಳೋದು ಕಷ್ಟ. ಎಲ್ಲಾನು ಮುಖ್ಯಾನೆ. ಹಣ, ಕೆಲಸ, ಪ್ರವಾಸ, independent life, personal ಲೈಫ್ ಎಲ್ಲ ಬೇಕು. ಹಾಗೆ ಅಮ್ಮ ಅಪ್ಪಂಗೆ ಸಹ ಪ್ರಾಮುಖ್ಯತೆ ಕೊಡಬೇಕು. ಅವರ ಬೇಕು ಬೇಡಗಳನ್ನ ಗಮನಿಸಬೇಕು. ಎಲ್ಲದರ ಮಧ್ಯೆ ಒಂದು balance maintain ಮಾಡಬೇಕು.